Friday, January 15, 2010

ಇತಿಹಾಸ ಮರುಕಳಿಸದೇ. ??


ಗೆಳೆಯರೇ ಮಾನವೀಯತೆ ಮರೆಯಾಗುತ್ತಿದೆ ನಾಗರೀಕತೆಯ ಹೆಸರಿನಲ್ಲಿ ಸಂಬಂಧಗಳು ಸಾಯುತ್ತಿವೆ ego & attitudeಗಳ ನಡುವೆ . ಒಮ್ಮೆ ಹಿಂತಿರುಗಿ ನೋಡಿದರೆ. ..ನಾವು ಪಡೆದದ್ದೇನು? ಒಂದಿಷ್ಟು ಹಣ,ಮೋಜು. ಐಶಾರಮತೆ.ಕಳೆದುಕೊಳ್ಳುತ್ತಿರುವುದು? ಆರೋಗ್ಯ, ಭಾವನಾತ್ಮಕ ಬೆಸುಗೆ .ಎಲ್ಲೋ ಒಂದು message ಓದಿದ ನೆನಪು ನನಗೆ ... ಕುಸಿದು ಬಿದ್ದ ಕನಸು, ಒಡೆದ ಸಂಬಂಧಗಳಿಗಿಂತ ಬಾಲ್ಯದ ಮುರಿದುಹೋದ pencil, ಮತ್ತು ಕುಸಿದು ಹೋದ ಮರಳು ಗೋಪುರಗಳು ಚಂದ ಎಂದು . ಒಮ್ಮೆ ತಿರುಗಿ ನೋಡಿ ನಿಮ್ಮ ಬಾಲ್ಯವನ್ನು .ನಿಮ್ಮ ಕನಸಿನರಮನೆಗೆ ನೀವೇ ರಾಜ/ರಾಣಿ . ಜೀವನದ ಜಂಜಾಟಗಳಿಲ್ಲದ ಸಾಮ್ರಾಜ್ಯ ಅದು. ನಿಷ್ಕಲ್ಮಶ ಕಪಟವನ್ನರಿಯದ ಮನಸು. promise ಕಣ್ರೀ... ದೇವರು ಬಂದು "ಏನು ಬೇಕು ಮಗಳೇ?" ಅಂತ ಕೇಳಿದ್ರೆ . ವಾಪಸ್ ನನ್ನ childhood days ಕೊಟ್ಬಿಡಪ್ಪ ಅಂತ ಕೇಳ್ತೇನೆ ...!!ಹದಿವಯಸಿನ ಮನದ ತುಮುಲಗಳು, ಗೆಳೆತನವನ್ನು ಬಯಸುವ ಮನಸು , crush, one side love .. ಅದು ಅಪ್ಪಟ ಮುಗ್ಧ ಪ್ರೀತಿ , ಬೇಜಾನ್ love ಮಾಡ್ಬಿಡ್ತೇವೆ ಅದ್ಕೆ ಅದು unforgetable..!! ಅಪ್ಪ, ಅಮ್ಮ ಇರೋವರೆಗೂ ನಾವೆಂದೂ 'ಅನಾಥ' ಅಂತ ಆಗೋದಿಲ್ಲ. ಜಗತ್ತು ನಮ್ಮನ್ನು ವಿರೋಧಿಸಿದರೂ parents will be always with us. ಆದ್ರೆ ವಿಪರ್ಯಾಸ ನೋಡಿ ತಮ್ಮದೇ ಮಕ್ಕಳು ಇರೋವಾಗ ಅಪ್ಪ, ಅಮ್ಮ ಸೇರ್ತಾ ಇರೋದು ಅನಾಥರಂತೆ ವೃದ್ಧಾಶ್ರಮವನ್ನು ..!!ನಾನೇನು philosophy ಹೇಳ್ತಾ ಇಲ್ಲ , ಇವಿಷ್ಟು ಮನಸಲ್ಲಿ ಹಾದೋಯ್ತು. ಜೀವನವನ್ನು ಪ್ರೀತಿಸೋಣ.. ಸ್ವಾರ್ಥವನ್ನು ಬದಿಗಿಟ್ಟು.. ಮತ್ತೊಮ್ಮೆ ಬಾಲ್ಯದ ಕನಸುಗಳ ಅರಮನೆಗೆ ಲಗ್ಗೆ ಹಾಕೋಣ . who cares for others?? ಬದುಕು ನಮ್ಮದು . ಇತಿಹಾಸ ಮರುಕಳಿಸದೇ. ??

1 comment:

  1. ನಿರೂಪಣೆ ಚೆನ್ನಾಗಿದೆ,
    ಹೇಳುವ ರೀತಿ ಇಷ್ಟ್ಟವಾಗುವ೦ತಿದೆ,
    ಅಭಿನ೦ದನೆಗಳು.
    any way good luck.

    ReplyDelete