Tuesday, January 19, 2010

ಮನದಲ್ಲೊಂದು ಮಳೆ .....


ಮೊದಲ ಮಳೆಗೆ
ಮನದ ಒಳಗೆ
ಏನೋ ಭಾವ ಸುಳಿಯುತಿದೆ..
ವಿರಸ ಕಳೆದು
ಕನಸು ಮೊಳೆತು
ಜೀವ ಭಾವ ತುಡಿಯುತಿದೆ..


ಕನಸು ಕಮರಿ
ಮನಸು ಬಳಲಿ
ಮರುಭೂಮಿಯಾಗಿತ್ತು ಮನಸು
ಮಳೆಯ ತಂಪು
ಮಣ್ಣ ಕಂಪು
ಮತ್ತೆ ಮೊಳೆಯಿತು ಕನಸು..


ಕಾದ ಭುವಿಗೆ ಮಧುರ ಸ್ಪರ್ಶ
ಎಲ್ಲಿಂದಲೋ ಇಳಿವ ಮಳೆಹನಿ
ದಣಿದ ಕಣ್ಣಿಗೆ ಏನೋ ಹರ್ಷ
ಕಣ್ಣಂಚಿನಲ್ಲಿ ಹೊಳೆವ ಹನಿ..
ಎಲ್ಲೋ ಹೊಯ್ದ ಮಳೆಯ ಕುರುಹು
ಇಲ್ಲಿ ಸುಳಿವ ತಂಗಾಳಿ ..
ಯಾರದೋ ನೆನಪು ನನ್ನ ಮನದಿ
ಅಂಚಿನಲಿ ಮುಗುಳು ನಗೆಯ ಸುಳಿ..!!

Monday, January 18, 2010

ಬೆಳದಿಂಗಳು......


ಬಾಂದಳದ ಚಂದಿರನಂತೆ
ಮನಸು ಒಂಟಿಯಾಗಿತ್ತು .....
ಹೊರಟಿದ್ದೆ ಬೆಳದಿಂಗಳ ಮೆರವಣಿಗೆಯಲ್ಲಿ ..
ಹಾದಿ ಬದಿಯ ಮರಗಳಿಂದ ನೆರಳು ಬೆಳಕಿನಾಟ....
ಪ್ರೇಮಿಗಳ ಪಿಸುಮಾತಿನಂತಿರುವ ಎಲೆಗಳ ಮರ್ಮರ ....
ಹರಿವನದಿಯಲ್ಲೊಂದು ತೇಲುವ ಬೆಳ್ಳಿ ಬಟ್ಟಲು...
ಅದು ಚಂದ್ರ ಬಿಂಬ ..!
ಕನಸಿನ ಮಾಯಲೋಕವಲ್ಲವಿದು ..
ವಾಸ್ತವದ ಪ್ರಕೃತಿ ವೈಭವ ..!!

ಮೂಲೆಯ ಗಂಗವ್ವನ ಜೋಪಡಿಗೂ
ಬೆಳ್ಳಿಯ ಬಣ್ಣ ..
ಸಾಹುಕಾರನ ಮೂರೂ ಅಂತಸ್ತಿನ ಬಂಗಲೆಯೂ
ರಜತಮಯ....
ಬೆಳದಿಂಗಳಿಗಿಲ್ಲವಲ್ಲ ಈ ತಾರತಮ್ಯ ...!!

ಕತ್ತೆತ್ತಿ ನೋಡಿದರೆ
ಬಾಂದಳದ ಚಿಕ್ಕ ಚುಕ್ಕಿಗಳೆಲ್ಲ ಮಾಯ...!
ಅಲ್ಲಲ್ಲಿ ಹರಡಿರುವ ..
ಬೆಳ್ಳಿ ಮೋಡಗಳ ತುಣುಕುಗಳು ಮಾತ್ರ ..

ಸಕಲ ಜೀವರಾಶಿಗೂ
ರಜತಮಯವಾಗುವ ರೋಮಾಂಚನ
ನಿಶೆಯ ಜಡತೆಯಲ್ಲಿ ಚೈತನ್ಯ ತುಂಬುವ ಈ ಬೆಳದಿಂಗಳು ..
ಇರಬಾರದೇ ಅನುದಿನವೂ ..
ಮನವೆಣಿಸುವುದು ಹೀಗೆ..

ಆದರೆ.....
ಆದರೆ ....
ಬಾನ ಸೀರೆಯಲಿ
ಬೆಳ್ಳಿ ತಾರೆಗಳ ಕಸೂತಿ ತುಂಬಲು
ಬರಲೇ ಬೇಕಲ್ಲ ಅಮಾವಾಸ್ಯೆಯು ...!

ಬಂತಿದೋ ವಸಂತ ತಂತಿದೋ ಸಂತಸ !



ಯಾವ ಕಲಾವಿದನ ಕಲ್ಪನೆಯ ಕಲಾಕೃತಿ ?
ಅರಳಿ ನಗುತಿದೆ ವಸಂತದ ಮಡಿಲಲ್ಲಿ ಪ್ರಕೃತಿ..
ಬಂತಿದೋ ವಸಂತ ತಂತಿದೋ ಸಂತಸ ll ಪ ll


ಋತುಗಳ ರಾಜನ ಆಗಮನ
ಗಿಡಗಳಲ್ಲೆಲ್ಲ ಚಿಗುರಿನ ನರ್ತನ
ಸೃಷ್ಟಿಯಲಿ ಹಸಿರಿನ ಸಿಂಚನ
ಜೀವಜಾಲಕೆ ರೋಮಾಂಚನ
ಬಂತಿದೋ ವಸಂತ ತಂತಿದೋ ಸಂತಸll ೧ ll


ಮಾವಿನ ತೊಪಲಿ ಬೇವಿನ ಕಂಪಲಿ
ದುಂಬಿಯ ಹಿಂಡಿನ ಝೇಂಕಾರ
ರಸ್ತೆಯ ಬದಿಯಲಿ ಹೊಲದ ಬೇಲಿಯಲಿ
ವನಕುಸುಮಗಳ ವಯ್ಯಾರ
ಬಂತಿದೋ ವಸಂತ ತಂತಿದೋ ಸಂತಸ ll೨ll


ಎಲೆಗಳನುದುರಿಸಿದ ಗಿಡಗಳಿಗೆಲ್ಲ
ಚಿಗುರೆಲೆಗಳ ನವೋಲ್ಲಾಸ
ಮುದದಲಿ ಹಾಡುವ ಕೋಗಿಲೆಗೆ
ಇನ್ನೆಲ್ಲಿಯ ಆಯಾಸ?
ಬಂತಿದೋ ವಸಂತ ತಂತಿದೋ ಸಂತಸ ll ೩ ಲ್
ಜಡದಲಿ ಮುಳುಗಿದ ಪ್ರಕೃತಿಗೆ ಚೇತನ
ನೀಡುವ ವಸಂತದ ರೂಪ ವಿನೂತನ
ಹರುಷದಿ ನಲಿಯಲಿ ಜನಮನ
ಬಂತಿದೋ ವಸಂತ ತಂತಿದೋ ಸಂತಸ ll ೪ ll

ಕಳೆದು ಹೋದ ಬಾಲ್ಯ ......

ರಳಿ ಬರದ
ಬಾಲ್ಯದ ದಿನಗಳೇ..
ಎಲ್ಲಿ ಕಳೆದು ಹೋದಿರಿ ?
ಆಧುನಿಕತೆಯ ಜಾತ್ರೆಯಲಿ..

ಹಾರುವ ಚಿಟ್ಟೆಯ ಹಿಡಿಯ ಹೋಗಿ
ಮುಳ್ಳು ಚುಚ್ಚಿಸಿಕೊಂಡ ನೆನಪು
ಇನ್ನೂ ಹಸಿರು ...
ಗಾಳಿಪಟವ ಹಾರಿಸಿ ಹಾರಿದ
ನೆನಪೇ ಈಗ ಉಸಿರು..

ಅಡುಗೆ, ಗೊಂಬೆ ಆಟಗಳ
ಮಜವೇ ಬೇರೆ..
ಗೋಲಿ ಲಗೋರಿ ಆಟಗಳ
ಮರೆಯಲಿ ಹೇಗೆ..?

ಕಳೆದು ಹೋಗಿವೆ ಈಗ
ಆ ಎಲ್ಲ ಆಟಗಳು
ಬಾಲ್, ಬ್ಯಾಟ್ , ಕ್ರಿಕೆಟ್ಗಳ ಮುಂದೆ..
ಕಂಪ್ಯೂಟರ್ , ಗೇಮ್ಸ್ ಗಳ ನಡುವೆ..


ನೆನಪಾಗುತಿವೆ
ಬಾಲ್ಯದ ದಿನಗಳು..
ಒಮ್ಮೆ ಬರಬಾರದಿತ್ತೆ ಮತ್ತೆ..
ನೆನಪಿನ ಸುರುಳಿಗಳು ಬಿಚ್ಚಿದಾಗ..
ಅವು ನಮ್ಮ ಸಂಗಾತಿಗಳು ಅಷ್ಟೆ.....!

life won't give one more chance to live


Give me some sunshine
Give me some rain
Give me another chance
Wanna growup once again...
ಏನ್ ಚೆನ್ನಾಗಿವೆ ಮೇಲಿನ ಸಾಲುಗಳು . 3 idiots movie ನೋಡಿದಾಗಿನಿಂದ ತುಂಬಾನೆ ಕಾಡ್ತಾ ಇರೋ ಸಾಲುಗಳು ಇವು . ಸಾಲದ್ದಕ್ಕೆ ಈ ಹಾಡಿನ ಚಿತ್ರಣವೂ ಸಕತ್ ಆಗಿ ಬಂದಿದೆ. ಗಿಟಾರ್ ಹಿಡಿದು Give me another chance ಅಂತಾ ಹಾಡ್ತಾ, ಆ chanceಗೆ ಕಾಯದೆ ಆತ್ಮಹತ್ಯೆ ಮಾಡ್ಕೊಳ್ಳೋ ಆ ಹುಡುಗ ಕನಸು ಕಾಣ್ತಾನೆ , ಒಂದು ಶಿಕ್ಷಣ ಸಂಸ್ಥೆಯನ್ನ ಅಣಕಿಸ್ತಾನೆ, ಕೊನೆಗೆ ಶವವಾಗ್ತಾನೆ ... ನಮ್ಮನ್ನೂ ಕಾಡ್ತಾನೆ ...!!
ಮಣ್ಣಲ್ಲಿರೋ ಒಂದು ಬೀಜಕ್ಕೆ ಸೂರ್ಯನ ಬೆಳಕು, ನೀರು ಸರಿಯಾಗಿ ಬಿದ್ದರೆ ಮಾತ್ರ , ಆ ಬೀಜ ಮೊಳೆತು ಸಸಿಯಾಗೋದು ಅಲ್ವಾ?? ಅದ್ಯಾಕೋ ನಮ್ಮ ಸಮಾಜಕ್ಕೆ ಸಸಿಯು ಚಿಗುರುವಾಗಲೇ ಚಿವುಟಿ , ಅವರಿಗೆ ಬೇಕಾದ ಆಕಾರದ ಗಿಡ ಮಾಡ್ಕೊಳ್ಳೋದು ಅಭ್ಯಾಸವಾಗಿ ಬಿಟ್ಟಿದೆ ಅನಿಸ್ತಿದೆ .
ಇಷ್ಟುದ್ದ ಪೀಠಿಕೆಯ ನಡುವೆ ನೆನಪಾದವನು my little friend 'ಆಕಾಶ್'. ಸೂಕ್ಷ್ಮಮನಸಿನ, ನಕ್ಷತ್ರಗಳ ಹೊಳಪನ್ನು ಬಾಚಿ ತನ್ನ ಕಂಗಳಲ್ಲಿ ತುಂಬಿಕೊಂಡ, ಮುದ್ದುಮುಖದ ,17ರ ಹರೆಯದಲ್ಲೇ ಕನಸುಗಳನ್ನು ಕಣ್ಣಲ್ಲೇ ಬಚ್ಚಿಟ್ಟು ಗೋರಿ ಸೇರಿದ ಹುಡುಗ ..!
ಕಾಲೇಜ್ನಲ್ಲಿ ನನ್ನ junior ಆಗಿದ್ದ ಹುಡುಗನಲ್ಲಿ ತುಂಬಾ ಸಲುಗೆಯಿತ್ತು . ನನ್ನ ಕಂಡಾಗಲೆಲ್ಲ 'hey sweetheart' ಅಂತಿದ್ದ ಕಣ್ಣು ಹೊಡೆದು , ಗೆಳೆಯರ ಗುಂಪಲ್ಲಿರುತ್ತಿದ್ದ ನಾನು ಕಣ್ಣಲ್ಲೇ ಗದರುತ್ತಿದ್ದೆ . ಆಗ ನಗುತ್ತ 'my sweet sis' ಎಂದು ಬದಲಾಯಿಸಿ ನಕ್ಕು ಬಿಡ್ತಿದ್ದ.
ಸರಿಯಾಗಿ ನೆನಪಿದೆ ಆ ದಿನ ನನಗೆ ತಿಂಡಿ ತಿನ್ನುತ್ತಿದ್ದ ನನ್ನನ್ನು ನನ್ನ cellphone ಕರೆದಿತ್ತು . ಗೆಳತಿ 'ಇಂಚರ' call ಮಾಡಿ "ಹೇ 'ಆಕಾಶ್' ಇನ್ನಿಲ್ಲ.!" ಅಂದಿದ್ದಳು ಬಿಕ್ಕುತ್ತ . ವಿಚಾರಿಸಿ ನೋಡಿದರೆ, physics lab exam ಮುಗಿಸಿ ಹೋಗಿದ್ದ ಹುಡುಗ ನೇಣಿಗೆ ಶರಣಾಗಿದ್ದ . ಯಾವುದೋ ಒಬ್ರು lecturer ಅವನದಲ್ಲದ ತಪ್ಪಿಗೆ ಕೆನ್ನೆಗೆ ಹೊಡೆದು ಅವಮಾನಿಸಿದ್ದನ್ನು ಸಹಿಸದೇ ಜಗತ್ತಿಗೆ good bye ಹೇಳಿದ್ದ . ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅವನಮ್ಮ ಅದೇ ದಿನ ನದಿಗೆ ಹಾರಿದರು . ಮೊಮ್ಮಗ , ಮಗಳು ಇಬ್ಬರ ಸಾವನ್ನು ಕೇಳಿದ ಮುದಿಜೀವ ಅವನ ಅಜ್ಜಿಯೂ ಅವರದೇ ದಾರಿ ಹಿಡಿದರು . ಒಂದೇ ದಿನ 3 ಸಾವು ಆ ಮನೆಯಲ್ಲಿ.! ಹೇಗಿರಬೇಡ ..?
ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಕೊಡದೆ ಮಲಗಿಬಿಟ್ಟಿದ್ದ ಚಿರವಾಗಿ break ಇರದ ಕನಸುಗಳನ್ನ ಕಾಣುತ್ತ. ಗೆಳೆಯರು ಅವನ ಅಂತಿಮ ದರ್ಶನಕ್ಕೆ ಕರೆದರೂ ನಾನು ಒಲ್ಲೇ ಎಂದಿದ್ದೆ ..
ಅದ್ಯಾಕೋ ಅವನ ಕನಸುಕಂಗಳ ಹೊಳಪು ಕಂಡಿದ್ದ ನನ್ನಲ್ಲಿ, ಅವನ ಮುಚ್ಚಿದ ಕಂಗಳನ್ನು ನೋಡುವ ಧೈರ್ಯವೇ ನನ್ನಲ್ಲಿ ಇರಲಿಲ್ಲ ..!
Life won't give one more chance to live..!! ಅಲ್ವಾ?

Friday, January 15, 2010

ಇತಿಹಾಸ ಮರುಕಳಿಸದೇ. ??


ಗೆಳೆಯರೇ ಮಾನವೀಯತೆ ಮರೆಯಾಗುತ್ತಿದೆ ನಾಗರೀಕತೆಯ ಹೆಸರಿನಲ್ಲಿ ಸಂಬಂಧಗಳು ಸಾಯುತ್ತಿವೆ ego & attitudeಗಳ ನಡುವೆ . ಒಮ್ಮೆ ಹಿಂತಿರುಗಿ ನೋಡಿದರೆ. ..ನಾವು ಪಡೆದದ್ದೇನು? ಒಂದಿಷ್ಟು ಹಣ,ಮೋಜು. ಐಶಾರಮತೆ.ಕಳೆದುಕೊಳ್ಳುತ್ತಿರುವುದು? ಆರೋಗ್ಯ, ಭಾವನಾತ್ಮಕ ಬೆಸುಗೆ .ಎಲ್ಲೋ ಒಂದು message ಓದಿದ ನೆನಪು ನನಗೆ ... ಕುಸಿದು ಬಿದ್ದ ಕನಸು, ಒಡೆದ ಸಂಬಂಧಗಳಿಗಿಂತ ಬಾಲ್ಯದ ಮುರಿದುಹೋದ pencil, ಮತ್ತು ಕುಸಿದು ಹೋದ ಮರಳು ಗೋಪುರಗಳು ಚಂದ ಎಂದು . ಒಮ್ಮೆ ತಿರುಗಿ ನೋಡಿ ನಿಮ್ಮ ಬಾಲ್ಯವನ್ನು .ನಿಮ್ಮ ಕನಸಿನರಮನೆಗೆ ನೀವೇ ರಾಜ/ರಾಣಿ . ಜೀವನದ ಜಂಜಾಟಗಳಿಲ್ಲದ ಸಾಮ್ರಾಜ್ಯ ಅದು. ನಿಷ್ಕಲ್ಮಶ ಕಪಟವನ್ನರಿಯದ ಮನಸು. promise ಕಣ್ರೀ... ದೇವರು ಬಂದು "ಏನು ಬೇಕು ಮಗಳೇ?" ಅಂತ ಕೇಳಿದ್ರೆ . ವಾಪಸ್ ನನ್ನ childhood days ಕೊಟ್ಬಿಡಪ್ಪ ಅಂತ ಕೇಳ್ತೇನೆ ...!!ಹದಿವಯಸಿನ ಮನದ ತುಮುಲಗಳು, ಗೆಳೆತನವನ್ನು ಬಯಸುವ ಮನಸು , crush, one side love .. ಅದು ಅಪ್ಪಟ ಮುಗ್ಧ ಪ್ರೀತಿ , ಬೇಜಾನ್ love ಮಾಡ್ಬಿಡ್ತೇವೆ ಅದ್ಕೆ ಅದು unforgetable..!! ಅಪ್ಪ, ಅಮ್ಮ ಇರೋವರೆಗೂ ನಾವೆಂದೂ 'ಅನಾಥ' ಅಂತ ಆಗೋದಿಲ್ಲ. ಜಗತ್ತು ನಮ್ಮನ್ನು ವಿರೋಧಿಸಿದರೂ parents will be always with us. ಆದ್ರೆ ವಿಪರ್ಯಾಸ ನೋಡಿ ತಮ್ಮದೇ ಮಕ್ಕಳು ಇರೋವಾಗ ಅಪ್ಪ, ಅಮ್ಮ ಸೇರ್ತಾ ಇರೋದು ಅನಾಥರಂತೆ ವೃದ್ಧಾಶ್ರಮವನ್ನು ..!!ನಾನೇನು philosophy ಹೇಳ್ತಾ ಇಲ್ಲ , ಇವಿಷ್ಟು ಮನಸಲ್ಲಿ ಹಾದೋಯ್ತು. ಜೀವನವನ್ನು ಪ್ರೀತಿಸೋಣ.. ಸ್ವಾರ್ಥವನ್ನು ಬದಿಗಿಟ್ಟು.. ಮತ್ತೊಮ್ಮೆ ಬಾಲ್ಯದ ಕನಸುಗಳ ಅರಮನೆಗೆ ಲಗ್ಗೆ ಹಾಕೋಣ . who cares for others?? ಬದುಕು ನಮ್ಮದು . ಇತಿಹಾಸ ಮರುಕಳಿಸದೇ. ??

ಅದೆನೆಲ್ಲ ಕಲಿಸಿ ಬಿಡತ್ತೆ ಈ ಪ್ರೀತಿ ??


ಯಾವುದೋ ಒಂದು pantಗೆ ಯಾವುದೋ ಒಂದು shirt
ಸಿಕ್ಕಿಸ್ಕೊಂಡು ಹೋಗ್ತಿದ್ದ ಹುಡುಗರು..
ಕ್ರಿಕೆಟ್, ಸಚಿನ್, ಧೋನಿ,christiano, messi, sharpova, sania, ..
ಅಂತಿದ್ದ ಹುಡುಗರ ಹೃದಯದಲ್ಲಿ ...
ಒಂದು 'ಗೆಜ್ಜೆ ಕಾಲುಗಳ ' ಗುರುತು ಮೂಡಿದರೆ ಸಾಕು..
ಅದೆಷ್ಟು ಬದಲಾವಣೆ??
hip-hop , rap music ಅಂತಿದ್ದೋರು..
ಕಿಶೋರ್ ಕುಮಾರ್ , ರಫಿ, ಮೈಸೂರು ಅನಂತ ಸ್ವಾಮಿ ಅಂತ
slow trackಗೆ ಅಂಟಿಕೊಂಡು ಬಿಡ್ತಾರೆ...
ಅನಾವಶ್ಯಕವಾಗಿ ಕವಿನೂ ಆಗ್ಬಿಡ್ತಾರೆ.. !
ಆಕಾಶದ ಚಂದ್ರಮ, ತಾರೆಗಳ ಜೊತೆ ಕನಸು ಕಾಣ್ತಾರೆ ..
ಅವಳ first meetನಿಂದ ಹಿಡಿದು ಪ್ರತಿ ಸಲದ
ಡ್ರೆಸ್ಸಿನ color ನೆನಪಿಟ್ಕೋoಡಿರ್ತರಲ್ವಾ??
ಅದೇನು memory power !!!!
ಅದ್ಕೆ ಇರಬೇಕು...
ನೆನಪುಗಳ ಮರೆಯೋ ಕಾಲ ಬಂದಾಗ..
ಹೆಚ್ಚು suffer ಆಗೋರು ಹುಡುಗರೇ...!!
memory power ಶಾಪ ಆಗೋದು ಆವಾಗಲೇ ... !!