Wednesday, December 30, 2009

ಒಂಟಿ ಮತ್ತೊಮ್ಮೆ..

ಮಂಗಳೂರಿನ ಜನಜಂಗುಳಿಯ ಮಧ್ಯೆ
ಒಂಟಿ ಎನಿಸುತ್ತಿದ್ದೇನೆ
ಬಂಡೆಗಲ್ಲಿನ ಮೇಲೆ ಕುಳಿತ ಭಗ್ನ ಪ್ರೇಮಿಯಂತೆ ..
ರೋಧಿಸುತಿದೆ ಮನಸು..
ಕಾಲೇಜು ಹುಡುಗಿಯರ ಬಸ್ಸಿನಲ್ಲಿ
ನಾನು ಮತ್ತೊಮ್ಮೆ ಮೌನಿ..
ಕೆಲವರು ಹಾಕುವ ಕಾಲ್ಗೆಜ್ಜೆ, ಕೈ ಬಳೆಗಳ ಸದ್ದುಗಳು
ನನ್ನ ಸಂಗಾತಿಗಳು..




ಕಡಲ ತಡಿಯಲ್ಲಿ ಕುಳಿತು..
ಅಲೆಗಳ ಭೋರ್ಗರೆತದ ನಡುವೆಅಳಬೇಕು ನಾನೊಮ್ಮೆ..
ನನ್ನ ಕಣ್ಣೀರು ಹರಿದು ಸಾಗರದ ನೀರಿನಲ್ಲಿ ಒಂದಾಗಬೇಕು..
ಯಾರು ಹುಡುಕಬಾರದು ನನ್ನ ಕಣ್ಣೀರನ್ನು ..
ಮಾನವ ಸಂಬಂಧಗಳು ಬದುಕಲು ಕಲಿಸುತ್ತವೆ..
ಕೊನೆಗೆ ಒಂಟಿತನವನ್ನೂ..
ಬರುವಾಗ ಹೋಗುವಾಗ ಒಂಟಿ...
ನಡುವೆ ಅರಳುವ ಒಂದಿಷ್ಟು ಭಾವ, ಜೀವಗಳು..


ಸಧ್ಯಕ್ಕೆ ಬದುಕು ಬಟಾ ಬಯಲು..
ಕಾಯುತಿದೆ ಬದುಕು ಮತ್ತೆ ಯಾರದೋ ನೆರಳನ್ನು..
ಸಧ್ಯಕ್ಕೆ ಕತ್ತಲೆ ನನ್ನ ನೆರಳೂ ಕಾಣುತ್ತಿಲ್ಲ..
ಬೆಳಕು ಹರಿಯುವ ವರೆಗೆ ಕಾಯಲೇ ಬೇಕಾದ
ಅನಿವಾರ್ಯತೆ ನನ್ನದು.. !!

1 comment: